ಆರೋಗ್ಯಕರ ಮನಸ್ಸು
ನಿಮಗೂ ಬೇಕೇ?
ಕ್ಲಿನಿಕಲ್ ಅಥವಾ ಆನ್ಲೈನ್ ಕನ್ಸಲ್ಟೆನ್ಸಿ ಮೂಲಕ ಆಯುರ್ವೇದ ಮನೋವೈದ್ಯ ಹಾಗೂ ತಜ್ಞನಾಗಿ 24 ವರ್ಷಗಳಿಗೂ ಹೆಚ್ಚಿನ ನನ್ನ ಅನುಭವ ಮತ್ತು ಜ್ಞಾನವನ್ನು ಬಳಸುವುದರ ಮೂಲಕ ಮನಸ್ಸು ಮತ್ತು ಅದಕ್ಕೆ ಸಂಬಂಧಿಸಿದ ಅಸ್ವಸ್ಥತೆಯನ್ನು ಗುಣಪಡಿಸಲು, ನಿರ್ವಹಿಸಲು ಅಥವಾ ತಡೆಯಲು ನಾನು ನಿಮಗೆ ಸಹಾಯ ಮಾಡಬಹುದು.
ಮನಸ್ಸು ತಜ್ಞರನ್ನು ಹಂಬಲಿಸುವುದೇಕೆ?
ಮನಸ್ಸು ಚಂಚಲವಾಗಲು ಕಾರಣಗಳು ಸಂಕೀರ್ಣ, ಪರಸ್ಪರ ಸಂಬಂಧಿತ ಮತ್ತು ಅವಲಂಬಿತವಾಗಿವೆ. ಅವುಗಳಲ್ಲಿ ಪಾಲಕರ ತಪ್ಪುಗಳು, ಆಳವಾಗಿ ಬೇರೂರಿರುವ ಬಾಲ್ಯದ ಸಮಸ್ಯೆಗಳು, ಶೋಚನೀಯ ದಂಪತಿಗಳ ಸಂಬಂಧಗಳು ಮತ್ತು ಸಾಮಾಜಿಕ ಮಾಧ್ಯಮಗಳ ತಪ್ಪಾದ ಬಳಕೆ ಮುಖ್ಯ ಕಾರಣಗಳು. ಆಂತರಿಕ ಆರೋಗ್ಯ ಪರಿಣತಿಯನ್ನು ಹೊಂದಿರುವ ತಜ್ಞ ವೈದ್ಯರು ಸಮಸ್ಯೆಗಳನ್ನು ಸರಳಗೊಳಿಸಲು ಮತ್ತು ಸೂಕ್ತವಾದ ಪರಿಹಾರಗಳನ್ನು ಕಂಡುಕೊಳ್ಳಲು ಸಹಾಯ ಮಾಡುತ್ತಾರೆ.
ಆಯುರ್ವೇದ ಮನಸ್ಸಿನ ಉಪಯೋಗ ಪಡೆಯಿರಿ!
ಇದು ಚಿಕಿತ್ಸೆ ಮತ್ತು ಆರೈಕೆಯ ಪರ್ಯಾಯ ಮಾರ್ಗ
ನೈಸರ್ಗಿಕತೆ
ಅಸ್ವಸ್ಥತೆಯನ್ನು ಗುಣಪಡಿಸುವಲ್ಲಿ ಮತ್ತು ತಡೆಗಟ್ಟುವಲ್ಲಿ ನೈಸರ್ಗಿಕತೆಯು ನಮ್ಮ ಆದ್ಯತೆಯಾಗಿದೆ.
ಸೂಕ್ತತೆ
ಜೀವನದ ಎಲ್ಲಾ ಅಂಶಗಳ ಮೇಲೆ ಧನಾತ್ಮಕ ಪ್ರಭಾವವನ್ನು ತರುವ ಸಾಮರ್ಥ್ಯ ಆಯುರ್ವೇದಕ್ಕಿದೆ..
ದೀರ್ಘಾವಧಿಯ ಉಪಯೋಗ
ಇದು ದೀರ್ಘ ಯೋಗಕ್ಷೇಮಕ್ಕಾಗಿ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನವಾಗಿದೆ.
ಸಂತಸದ ಮನಸ್ಸಿಗಾಗಿ ನಮ್ಮ ಸೇವೆಗಳು
ನಿಮ್ಮ ಅಗತ್ಯ ಮತ್ತು ನಮ್ಮನ್ನು ತಲುಪುವ ಅನುಕೂಲಕ್ಕೆ ತಕ್ಕಂತೆ ಸೇವೆಗಳನ್ನು ಆಯ್ಕೆ ಮಾಡಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)
ನೀವು ಹೊಂದಿರಬಹುದಾದ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ.
ಕ್ಲೈಂಟ್ ಗಳ ಮನಮುಟ್ಟುವ ಮಾತುಗಳು!
ತಮ್ಮ ಮನಸ್ಸಿನ ಸಮಸ್ಯೆಗಳನ್ನು ಗೆದ್ದ ನಮ್ಮ ಕ್ಲೈಂಟ್ ಗಳ ಭಾವಪೂರ್ಣ ಮಾತುಗಳು ಹೀಗಿವೆ.
ಅವರೊಂದಿಗಿನ ಕನ್ಸಲ್ಟೇಶನ್ ನಂತರ ನಾನು ಒಂದು ತಿಂಗಳೊಳಗೆ ನನ್ನ ದುಃಖದ ಮನಸ್ಥಿತಿಯಿಂದ ಹೊರಬರಲು ಸಾಧ್ಯವಾಯಿತು. ಆರಂಭದಲ್ಲಿ, ಇದು ನನ್ನ ಅರಿವಿಗೆ ಬರದಿದ್ದರೂ, ಒಂದೆರಡು ವಾರಗಳ ನಂತರ ಸಕಾರಾತ್ಮಕ ಫಲಿತಾಂಶಗಳನ್ನು ಗುರುತಿಸಿದೆ. ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಹಗುರವಾದ ಭಾವನೆ ನನ್ನಲ್ಲಿ ಮೂಡಿತು. ಅಗತ್ಯವಿದ್ದಾಗಲೆಲ್ಲ ಹಿಂಜರಿಯದೆ ಬೆಂಬಲಿಸುವ ಅಪರೂಪದ ಗುಣ ಅವರದು. ಹಾಗಾಗಿ ಡಾ. ಅನಿಲ್ ರೈ ಅವರ ವೈಯಕ್ತಿಕ ಸಮಾಲೋಚನೆ ಮತ್ತು ಸಲಹಾ ಅವಧಿಗಳನ್ನು (Consultation and counseling sessions) ಇತರರಿಗೂ ಶಿಫಾರಸು ಮಾಡಲು ನನಗೆ ಸಂತೋಷವಾಗುತ್ತದೆ.’
ಸಮಸ್ಯೆಗಳ ಮೂಲಕ್ಕೆ ಇಳಿವ ಆಯುರ್ವೇದದ ವಿಧಾನ, ಸ್ವಯಂ ಪ್ರೀತಿ, ಮತ್ತು ಕೃತಜ್ಞತಾ ಭಾವನೆಗಳ ಮಹತ್ವವನ್ನು ವಾಸ್ತವಿಕವಾಗಿ ಅರ್ಥಮಾಡಿಸುವ ಅವರ ಕಾರ್ಯರೀತಿ ಮನಸ್ಸನ್ನು ಶಾಂತಗೊಳಿಸಲು ಮತ್ತು ಗೊಂದಲದ ಸಮಸ್ಯೆಗಳನ್ನು ನಿವಾರಿಸಲು ನನಗೆ ಗಮನಾರ್ಹವಾಗಿ ಸಹಾಯ ಮಾಡಿತು. ದೇವರು ಅವರನ್ನು ಆಶೀರ್ವದಿಸಲಿ, ಧನ್ಯವಾದಗಳು.”
ಸಮರ್ಥರಾದ ಡಾ ಅನಿಲ್ ರೈ ಅವರಿಗೆ ಸಮಸ್ಯೆಗಳನ್ನು ಎತ್ತಿ ತೋರಿಸಿ ಅದರಿಂದ ಉಂಟಾದ ಅತಿಯಾದ ಚಿಂತನೆ ಮತ್ತು ನಕಾರಾತ್ಮಕ ನಂಬಿಕೆಗಳ ಕುಣಿಕೆಯಿಂದ ನನ್ನನ್ನು ಹೊರತರಲು ಸಾಧ್ಯವಾಯಿತು. ಆಯುರ್ವೇದಿಕ್ ಕೌನ್ಸೆಲಿಂಗ್ ಸೆಷನ್ಗಳು ಹಾಗೂ ಅವರು ಸಮಸ್ಯೆಯನ್ನು ನಿಭಾಯಿಸಿದ ರೀತಿ ನನಗೆ ಸ್ವಯಂ-ಅರಿವು ಮತ್ತು ನನ್ನ ಜೀವನವನ್ನು ಧನಾತ್ಮಕವಾಗಿ ಬದಲಾಯಿಸಲು ಸಹಾಯ ಮಾಡಿತು.”
ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಿದ್ಧರಿದ್ದೀರಾ? FREE ಸೆಷನ್ ಬುಕ್ ಮಾಡಿ
ತಜ್ಞರೊಂದಿಗೆ ಎಲ್ಲರೂ ಸಮಾಲೋಚನೆ ನಡೆಸುವ ಅಗತ್ಯವಿಲ್ಲ. ಆದರೆ ಅನೇಕರು ಇದನ್ನು ನಿರ್ಲಕ್ಷಿಸುವಂತಿಲ್ಲ. ಅರ್ಹ ಮನೋವೈದ್ಯರು ಮತ್ತು ತಜ್ಞರು ಮಾತ್ರ ಈ ವಿಷಯದಲ್ಲಿ ಪ್ರಾಮಾಣಿಕವಾಗಿ ಸಹಾಯ ಮಾಡಬಹುದು. ಆದ್ದರಿಂದ ಈ ಕುರಿತು ಚರ್ಚಿಸೋಣ.
ಏಕೆ ಡಾ.ಅನಿಲ್ ರೈ?
“ಮನಸ್ಸಿನ ಕಾರ್ಯಗಳ ಬಗೆಗಿನ ಆಯುರ್ವೇದದ ಕಾಲಾತೀತ ತತ್ವಗಳು ಮತ್ತು ಆಧುನಿಕ ದೃಷ್ಟಿಕೋನಗಳ ಸಮ್ಮಿಲನದ ಮೂಲಕ ಆಂತರಿಕ ಆರೋಗ್ಯ ನಿರ್ವಹಣೆ, ಮನಸ್ಸಿನ ಯೋಗಕ್ಷೇಮ ಪಾಲನೆ ಮತ್ತು ಸಮತೋಲನದ ಜೀವನ ನಡೆಸಸಲು ಜನರಿಗೆ ಸಹಕರಿಸಬೇಕು ಎಂಬುದು ನನ್ನ ಆಶಯ.” – ಡಾ. ಅನಿಲ್ ರೈ. ಹೆಚ್ಚು ತಿಳಿಯಿರಿ.