ಅಧ್ಯಯನದಲ್ಲಿ ಆಸಕ್ತಿ ಇಲ್ಲದ ಸಮಸ್ಯೆಯನ್ನು ಹೊಂದಿದ್ದ ಯುವ ವಿದ್ಯಾರ್ಥಿಯೊಬ್ಬನ ಚೈತನ್ಯವನ್ನು ಚುರುಕುಗೊಳಿಸಿದ ಡಾ. ಅನಿಲ್ ರೈ!
ರೋಹನ್ ಮನೆಯಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಹಾಸ್ಟೆಲ್ನಲ್ಲಿ ವಾಸಿಸುವ ಹದಿಹರೆಯದ ವಿದ್ಯಾರ್ಥಿ. ಅವನಿಗೆ ಅಧ್ಯಯನದಲ್ಲಿ ಆಸಕ್ತಿ ಇಲ್ಲದ ಸಮಸ್ಯೆಯ ಜೊತೆಗೆ ಒಂಟಿತನ ಮತ್ತು ಶೈಕ್ಷಣಿಕ ಚಟುವಟಿಕೆಗಳಿಂದಲೇ ದೂರ ಉಳಿಯುವಂತಾಗಿತ್ತು. ಅವನ ಅಂಕಗಳು ತೀರಾ ಕಡಿಮೆಗೊಂಡು ಆಗಾಗ್ಗೆ ತರಗತಿಯಲ್ಲಿ ಹಗಲುಗನಸು ಕಾಣುವುದು ರೂಢಿಯಾಗಿತ್ತು.
ಆಯುರ್ವೇದ ಆಧಾರಿತ ಪರಿಶೀಲನೆ
ಪ್ರಜ್ಞಾಪೂರ್ವಕ ಪಾಲನೆ ಮತ್ತು ಮಕ್ಕಳ ಅಭಿವೃದ್ಧಿ ಸಮಾಲೋಚನೆಯು ಡಾ. ಅನಿಲ್ ರೈ ಅವರ ವೃತ್ತಿಪರ ಅನುಭವದ ಭಾಗವಾದ್ದರಿಂದ ರೋಹನ್ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅವರು ನಿಖರವಾಗಿ ಅರ್ಥಮಾಡಿಕೊಂಡರು.
ದೋಷ ವಿಶ್ಲೇಷಣೆ
ರೋಹನ್ ಪ್ರಧಾನವಾಗಿ ಕಫ ಮಾದರಿಯ ವ್ಯಕ್ತಿ. ಅವನಲ್ಲಿ ಕಿರಿಕಿರಿ, ಹತಾಶೆ ಮತ್ತು ಕಡಿಮೆ ಅವಧಿಯಲ್ಲಿ ಅತಿಯಾದ ತೂಕ ನಷ್ಟದಂತಹಾ ಲಕ್ಷಣಗಳು ಕಂಡುಬಂದಿದ್ದವು.
ಕುಟುಂಬದಿಂದ ದೂರವಾಗಿ ಬದುಕುವುದು, ಸರಿಯಾದ ಭಾವನಾತ್ಮಕ ಬೆಂಬಲದ ಕೊರತೆ ಮತ್ತು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಕಡಿಮೆ ಗಮನ ಅವನ ಆಂತರಿಕ ಹೋರಾಟಗಳನ್ನು ಹೆಚ್ಚಿಸುತ್ತಿತ್ತು.
ಆಯುರ್ವೇದ ಆಧಾರಿತ ಪರಿಹಾರ
ರೋಹನ್ ತಾನು ಏನನ್ನು ಎದುರಿಸುತ್ತಿದ್ದೇನೆ ಎಂಬುದನ್ನು ನಿಖರವಾಗಿ ವಿವರಿಸಲು ಹೆಣಗಾಡುತ್ತಿದ್ದ. ಆದ್ದರಿಂದ, ಡಾ. ಅನಿಲ್ ರೈ ತೀವ್ರ ಸಮಾಲೋಚನೆಗಳನ್ನು ತೆಗೆದುಕೊಂಡು ಅವರಿಗೆ ಸೂಕ್ತವಾದ ಪರಿಹಾರವನ್ನು ಕಂಡುಕೊಂಡರು.
ಆಹಾರ ಪದ್ಧತಿಯಲ್ಲಿ ಬದಲಾವಣೆ
ಸುಲಭವಾಗಿ ಜೀರ್ಣವಾಗುವ ಆಹಾರಗಳಾದ ತರಕಾರಿಗಳು, ಹಣ್ಣುಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಪ್ರೋಟೀನ್ಗಳಿಗೆ ಒತ್ತು ನೀಡಲಾಯಿತು. ಎಣ್ಣೆಯುಕ್ತ ಆಹಾರಗಳನ್ನು ಕಡಿಮೆ ಮಾಡುವುದರ ಜೊತೆಗೆ ಕರಿದ ಆಹಾರಗಳು ಮತ್ತು ಸಂಸ್ಕರಿಸಿದ ತಿಂಡಿಗಳ ಸೇವನೆಯನ್ನು ಮಿತಿಗೊಳಿಸಬೇಕಾಗಿತ್ತು.
ಜೀವನಶೈಲಿಯ ತಿದ್ದುಪಡಿಗಳು
ರೋಹನ್ಗೆ ಮಧ್ಯಮ ರೀತಿಯಲ್ಲಿ ದೈಹಿಕವಾಗಿ ಸಕ್ರಿಯವಾಗಿರಲು ಕಟ್ಟುನಿಟ್ಟಾಗಿ ಸೂಚಿಸಲಾಗಿತ್ತು. ದೇಹ ಮತ್ತು ಮನಸ್ಸಿನ ಉದಾಸೀನತೆ ಹೋಗಲಾಡಿಸಲು ಲಘು ಯೋಗಾಸನಗಳು, ಹೊರಾಂಗಣ ಕ್ರೀಡೆಗಳನ್ನು ಆಡುವುದು, ಉಪಯುಕ್ತ ಉಸಿರಾಟದ ತಂತ್ರಗಳನ್ನು ಅಭ್ಯಾಸ ಮಾಡುವುದು, ಉತ್ತಮ ಸ್ನೇಹಿತರೊಂದಿಗೆ ಸಂಪರ್ಕ – ಹೀಗೆ ಅವನ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಯಿತು. ಜೊತೆಗೆ, ಅವನನ್ನು ಮತ್ತೆ ಶಕ್ತಿಯುತ ಮತ್ತು ಉತ್ಸಾಹಭರಿತ ವಿದ್ಯಾರ್ಥಿ ಜೀವನಕ್ಕೆ ತರಲು ಹಲವು ಸಮಾಲೋಚನೆ ಅವಧಿಗಳನ್ನು (counseling sessions) ಯಶಸ್ವಿಯಾಗಿ ನಡೆಸಲಾಯಿತು.
ಫಲಿತಾಂಶಗಳು
ಸಲಹೆ-ಸೂಚನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಿದ ನಂತರ, ರೋಹನ್ ಪ್ರಯೋಜನಕಾರಿ ಫಲಿತಾಂಶಗಳನ್ನು ಅನುಭವಿಸಿದನು.